ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ (ಜುಲೈ 25, 1908 -ಒಕ್ಟೋಬರ್ 31, 2003) ಕರ್ನಾಟಕ ಸಂಗೀತದ ಪ್ರಖ್ಯಾತ ಹಾಡುಗಾರರು. ಇವರ ಸಂಗೀತ ಸಾಧನೆಗೆ ಬಹುತೇಕ ಎಲ್ಲಾ ಪ್ರಶಸ್ತಿಗಳೂ ಸಂದಿವೆ. ಅದರಲ್ಲಿ ಪ್ರಮುಖವಾಗಿ ಪದ್ಮ ವಿಭೂಷಣ, ೧೯೫೩ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮಧ್ಯಪ್ರದೇಶ ಸರಕಾರ ಕೊಡಮಾಡುವ ಕಾಳೀದಾಸ್ ಸಮ್ಮಾನ್ ಪ್ರಶಸ್ತಿ, ಕೇರಳ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಗಮನಾರ್ಹವಾಗಿವೆ. ಇವರನ್ನು ಕರ್ಣಾಟಕ ಸಂಗೀತದ ಪಿತಾಮಹ ಎಂದು ಸಹ ಕರೆಯುವರು. ಇವರು ಭಾರತದ ಶಾಸ್ತ್ರೀಯ ಸಂಗೀತದಲ್ಲೂ ಪರಿಣಿತಿ ಹೊಂದಿರುವರು.